Thursday, March 5, 2015

ನಿಮ್ಮ ಕಾಮೆಂಟುಗಳೇ ನಮಗೆ ಪೆಪ್ಪೆರುಮಿಂಟು

ಮನಸಿನ ಮಾತುಗಳನ್ನು ಹಂಚಲು ಬ್ಲಾಗಿನಲ್ಲಿ ಬಾಗಿಲು ತೆರೆದೆ
ಅಂದುಕೊಂಡೆ ಹೀಗೂ ತಲುಪಬಹುದು ಮನಸಿನ ಕದ

ಕೊರೆದೆ ನಾನು ಕಥೆ ಕವನ ಪದ್ಯ
ಬಚಾವಾದೆವು ಅಂದರು ಸದ್ಯ !
ಎಳೆದೆ ನಾನು ಕೆಲವರ ಪಾದ
ಜರೆದರು ಇವನಿಗೇನು ಮದ !

ಬದುಕು ಬಯಕೆ ಬಿನ್ನಾಣ ಅಂದೆ
ತಟ್ಟಿ ಬಿಡ್ತೇವೆ ಅಂದರು ಇಂದೇ !
ಅರ್ಥವಾಗದ ರೀತಿಲಿ ಬರೆದೆ
ಅನರ್ಥವಾಗಿ ಪೆಟ್ಟು ಬಿದ್ದಿದೆ !

ಕವಿ ಕಾವ್ಯವಾಗಿ ಕಾಗೆ ಕೋಗಿಲೆಯಾದರೂ
ಅರುಚಿಯವನಿಗೆ ಸಕ್ಕರೆ ಸವಿಯಾದರೂ

ನಿಮ್ಮ ಕಾಮೆಂಟುಗಳೇ ನಮಗೆ ಪೆಪ್ಪೆರುಮಿಂಟು
ನಮ್ಮೆಲ್ಲ ಬರಹಗಳಿಗೆ ಇವೇ ಪೇಮೆಂಟು !!

No comments: